ಸುಬ್ರಾಯ ಶಾಸ್ತ್ರಿ

Update: 2019-11-27 16:24 GMT

ಉಡುಪಿ, ನ.27: ಹಿರಿಯ ಚಿತ್ರಕಲಾ ಗುರುಗಳಾದ ಬಾರ್ಕೂರು ಸುಬ್ರಾಯ ಶಾಸ್ತ್ರಿ ಇಂದು ಮಣಿಪಾಲದ ಆಸ್ಪತ್ರೆಯಲ್ಲಿ ನಿಧನರಾದರು.

ಶಾಸ್ತ್ರಿ ಅವರು ಪರ್ಕಳದ ಆಸುಪಾಸಿನ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿದ್ದು, ಚಿತ್ರಕಲಾ ಸ್ಪರ್ಧೆಗಳನ್ನು ನಡೆಸಿ ಬಹುಮಾನ ನೀಡುತಿದ್ದರು. ಅವರು ತಮಿಳುನಾಡಿನ ತಿರುಮಂಗಲಂ ಪದವಿಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದರು. ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ