ಕಲ್ಯಾಣಿ ಆರ್. ಪೂಜಾರಿ
Update: 2019-12-02 14:34 GMT
ಮುಂಬೈ, ಡಿ.2: ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ಡಾ. ರಾಜಶೇಖರ್ ಆರ್. ಕೋಟ್ಯಾನ್ ಇವರ ತಾಯಿ ಸಾಂತೂರು ಗರಡಿಮನೆ ಕಲ್ಯಾಣಿ ಆರ್.ಪೂಜಾರಿ (78) ಸೋಮವಾರ ಇಲ್ಲಿ ನಿಧನರಾದರು.
ಮೂಲತ: ಉಡುಪಿ ಜಿಲ್ಲೆಯ ಮುದರಂಗಡಿ ಸಾಂತೂರು ಕೊಡಂಗಲ ಗರಡಿ ಮನೆತನದವರಾಗಿರುವ ಕಲ್ಯಾಣಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯು ನಾಳೆ ಡಿ.3ರಂದು ಬೆಳಗ್ಗೆ 10 ಗಂಟೆಗೆ ಸ್ವಗೃಹದಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.