ಕೆಪಿಎಲ್ ಬೆಟ್ಟಿಂಗ್ ಪ್ರಕರಣ: ಕೋಚ್ ಮನೆಯಲ್ಲಿ ಸಿಸಿಬಿ ಶೋಧ

Update: 2019-12-02 16:24 GMT

ಬೆಂಗಳೂರು, ಡಿ.2: ಕರ್ನಾಟಕ ಪ್ರೀಮಿಯರ್ ಲೀಗ್(ಕೆಪಿಎಲ್) ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ಕ್ರಿಕೆಟ್ ಕೋಚ್ ಸುರೇಂದ್ರ ಶಿಂಧೆ ಮನೆಯಲ್ಲಿ ಶೋಧ ನಡೆಸಿ, ಕೆಲ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.

ಸೋಮವಾರ ನಗರದ ದೊಮ್ಮಲೂರಿನ ಬಳಿಯಲ್ಲಿರುವ ಸುರೇಂದ್ರ ಶಿಂಧೆ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು, ನ್ಯಾಯಾಲಯದಿಂದ ವಾರೆಂಟ್ ಪಡೆದು ಶೋಧ ಕಾರ್ಯ ನಡೆಸಿದರು ಎಂದು ತಿಳಿದುಬಂದಿದೆ.

ಬೆಳಗಾವಿ ತಂಡದ ಕೋಚ್ ಹಾಗೂ ಕರ್ನಾಟಕದ ಅಂಡರ್ 19ನೇ ತಂಡದ ಕೋಚ್ ಆಗಿರುವ ಸುರೇಂದ್ರ ಶಿಂಧೆ, ಕೆಎಸ್‌ಸಿಎ ನಿರ್ವಾಹಣೆ ಸಮಿತಿಯ ಸದಸ್ಯರು ಆಗಿದ್ದಾರೆ ಎಂದು ಸಿಸಿಬಿ ತಿಳಿಸಿದೆ.

ಸದ್ಯ, ಅವರ ನಿವಾಸದ ಮೇಲೆ ಮಾತ್ರ ದಾಳಿ ನಡೆಸಿ, ಕಾರ್ಯಾಚರಣೆ ನಡೆಸಲಾಗಿದೆ ಹೊರತು, ಅವರನ್ನು ಬಂಧಿಸಿಲ್ಲ ಎಂದಿರುವ ಸಿಸಿಬಿ ಪೊಲೀಸರು, ಬೆಟ್ಟಿಂಗ್ ಪ್ರಕರಣ ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News