ಕೆಪಿಎಲ್ ಬೆಟ್ಟಿಂಗ್ ಪ್ರಕರಣ: ಕೋಚ್ ವಿಚಾರಣೆ ನಡೆಸಿದ ಸಿಸಿಬಿ
Update: 2019-12-03 16:16 GMT
ಬೆಂಗಳೂರು, ಡಿ.3: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ಸಿಸಿಬಿ ಪೊಲೀಸರು, ಕ್ರಿಕೆಟ್ ಕೋಚ್ ಸುರೇಂದ್ರ ಶಿಂಧೆಯನ್ನು ಮಂಗಳವಾರ ವಿಚಾರಣೆಗೊಳಪಡಿಸಿದರು.
ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದ ತಂಡ, ಸುರೇಂದ್ರ ಶಿಂಧೆನನ್ನು ವಿಚಾರಣೆಗೊಳಪಡಿಸಿ, ಪ್ರಕರಣ ಸಂಬಂಧ ಹೇಳಿಕೆಗಳನ್ನು ದಾಖಲು ಮಾಡಿಕೊಂಡರು ಎಂದು ತಿಳಿದುಬಂದಿದೆ.
ಸೋಮವಾರ ಇಲ್ಲಿನ ದೊಮ್ಮಲೂರಿನ ಬಳಿಯಲ್ಲಿರುವ ಸುರೇಂದ್ರ ಶಿಂಧೆ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದರು.