ಸರಕಾರದ ವಿವಿಧ ಇಲಾಖೆಗಳ ಹುದ್ದೆ ಭರ್ತಿಗೆ ಆಗ್ರಹ

Update: 2019-12-03 17:47 GMT

ಬೆಂಗಳೂರು, ಡಿ.3: ಸರಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಸ್ನೇಹ ದೀಪ ಅಂಗವಿಕಲರ ಸಂಸ್ಥೆ ಆಗ್ರಹಿಸಿದೆ.

ಮಂಗಳವಾರ ನಗರದ ಫ್ರೀಡಂ ಪಾರ್ಕ್‌ನ ಹೊರಾಂಗಣದಲ್ಲಿ ಸ್ನೇಹ ದೀಪ ಅಂಗವಿಕಲರ ಸಂಸ್ಥೆ ಹಾಗೂ ಡಿಲೇಟ್ ಟ್ರಸ್ಟ್ ವತಿಯಿಂದ ವಿಶ್ವ ಅಂಗವಿಕಲರ ದಿನಾಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಸ್ಥೆಯ ಸಂಚಾಲಕ ಪೌಲ್ ಮುದ್ದ, ಸರಕಾರದ ವಿವಿಧ ಇಲಾಖೆಗಳಲ್ಲಿ ಬರೋಬ್ಬರಿ ಮೂರು ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಉಳಿದಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ, ಭರ್ತಿ ಮಾಡಬೇಕು ಎಂದರು.

ಡಿಲೇಟ್ ಟ್ರಸ್ಟ್ ಮುಖ್ಯಸ್ಥೆ ಅಂಬಿಕಾ ಸಿಂಗ್ ಮಾತನಾಡಿ, ವಿಕಲಚೇತನರು ದುರ್ಬಲರೆಂದು ಭಾವಿಸದೆ ಇತರರಂತೆ ಬದುಕು ಕಟ್ಟಿಕೊಳ್ಳುವಂತಾಗಲು ಅವಕಾಶ ನೀಡಬೇಕಿದೆ. ವಿಕಲಚೇತನರ ಬಗ್ಗೆ ಅನುಕಂಪದ ಜೊತೆಗೆ ಅವಕಾಶವನ್ನು ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ವಿಕಲಚೇತನರಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲಿಯೂ ಇರಬೇಕು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News