ಫಲಿತಾಂಶದ ನಂತರ ವಿಪಕ್ಷಗಳ ಸ್ಥಿತಿ ಕಾದು ನೋಡಿ: ಅಶ್ವಥ್ ನಾರಾಯಣ

Update: 2019-12-06 16:01 GMT

ಬೆಂಗಳೂರು, ಡಿ.6: ಉಪಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್, ಜೆಡಿಎಸ್ ಸ್ಥಿತಿಯನ್ನು ಹೇಗಿರುತ್ತದೆಂದು ಕಾದು ನೋಡಬೇಕೆಂದು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕನಿಷ್ಠ 15 ಕ್ಷೇತ್ರಗಳಲ್ಲಿ 12ರಲ್ಲಿ ಗೆಲ್ಲಲಿದೆ. ಹೀಗಾಗಿ ನಮ್ಮ ಸರಕಾರ ಭದ್ರವಾಗಲಿದ್ದು, ವಿಪಕ್ಷಗಳು ಯಾವ ಸ್ಥಿತಿಗೆ ತಲುಪಲಿವೆ ಎಂಬುದನ್ನು ಡಿ.9ರವರೆಗೆ ಕಾದು ನೋಡಬೇಕೆಂದು ತಿಳಿಸಿದರು.

ಕಾಂಗ್ರೆಸ್-ಜೆಡಿಎಸ್‌ನಿಂದ ಬಿಜೆಪಿಗೆ ಬಂದಿರುವ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಅವರು ಕೈಗೊಳ್ಳುವ ಯಾವುದೇ ಕ್ರಮಕ್ಕೆ ಸರಕಾರದ ಎಲ್ಲ ಸಚಿವರು ಬೆಂಬಲ ನೀಡಲಿದ್ದಾರೆಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News