ಚೆನ್ನೈ ಗೆ ತಲುಪಿದ ಟೀಮ್ ಇಂಡಿಯಾ

Update: 2019-12-12 17:27 GMT

ಚೆನ್ನೈ, ಡಿ.12: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ರವಿವಾರ ನಡೆಯಲಿರುವ ಮೊದಲ ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಲು ಭಾರತ ಹಾಗೂ ವೆಸ್ಟ್‌ಇಂಡೀಸ್ ತಂಡಗಳ ಆಟಗಾರರು ಗುರುವಾರ ಇಲ್ಲಿಗೆ ಬಂದಿದ್ದಾರೆ.

ಕುಲದೀಪ ಯಾದವ್ ಹಾಗೂ ರವೀಂದ್ರ ಜಡೇಜ ಅವರೊಂದಿಗಿದ್ದ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಫೋಟೊದ ಕೆಳಗೆ ‘ಟಚ್ ಡೌನ್ ಚೆನ್ನೈ’ಎಂದು ಬರೆದಿದ್ದಾರೆ.

ಉಭಯ ತಂಡಗಳು 3 ಪಂದ್ಯಗಳ ಏಕದಿನ ಸರಣಿಯನ್ನು ಆಡಲು ಸಜ್ಜಾಗಿವೆ. ಬುಧವಾರ ಮುಂಬೈನಲ್ಲಿ ಕೊನೆಗೊಂಡಿದ್ದ 3 ಪಂದ್ಯಗಳ ಟ್ವೆಂಟಿ-20 ಸರಣಿಯನ್ನು ಆತಿಥೇಯ ಭಾರತ 2-1 ಅಂತರದಿಂದ ವಶಪಡಿಸಿಕೊಂಡಿತ್ತು. ಮೊದಲ ಪಂದ್ಯ ಚೆನ್ನೈನಲ್ಲಿ ನಡೆದರೆ, ಉಳಿದೆರಡು ಏಕದಿನ ಪಂದ್ಯಗಳು ವಿಶಾಖಪಟ್ಟಣ(ಡಿ.18) ಹಾಗೂ ಕಟಕ್(ಡಿ.22)ನಲ್ಲಿ ನಡೆಯುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News