ಬಿಎಂಟಿಸಿ ಅಭಿಯಾನಕ್ಕೆ ಪುನೀತ್ ರಾಜ್‌ ಕುಮಾರ್ ರಾಯಭಾರಿ

Update: 2019-12-13 16:34 GMT

ಬೆಂಗಳೂರು, ಡಿ.13: ಜನರನ್ನು ಸಮೂಹ ಸಾರಿಗೆ ಬಳಸುವಂತೆ ಉತ್ತೇಜಿಸುವ ಉದ್ದೇಶದಿಂದ ಬಿಎಂಟಿಸಿಯು ತನ್ನ ಅಭಿಯಾನದ ರಾಯಭಾರಿಯನ್ನಾಗಿ ಕನ್ನಡ ಚಲನಚಿತ್ರ ನಟ ಪುನೀತ್‌ರಾಜ್ ಕುಮಾರ್‌ರನ್ನು ಆಯ್ಕೆ ಮಾಡಿದೆ.

ಶುಕ್ರವಾರ ನಗರದ ಬಿಎಂಟಿಸಿಯ ಮುಖ್ಯ ಕಚೇರಿಯಲ್ಲಿ ಪುನೀತ್ ರಾಜ್‌ಕುಮಾರ್‌ರನ್ನು ಸಂಸ್ಥೆಯ ಎಂಡಿ ಶಿಖಾ ಅಭಿನಂದಿಸಿದರು.

ತಮ್ಮ ಚಿತ್ರಗಳ ಮೂಲಕ ಸಮಾಜಕ್ಕೆ ಸಂದೇಶವನ್ನು ನೀಡುತ್ತಿರುವ ಪುನೀತ್ ರಾಜ್‌ಕುಮಾರ್‌ಗೆ ತಮ್ಮದೇ ಆದ ಅಭಿಮಾನಿಗಳಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಬಿಎಂಟಿಸಿ ಕೈಗೊಂಡಿರುವ ಹೊಸ ಅಭಿಯಾನದ ರಾಯಭಾರಿಯಾಗಿ ಅವರನ್ನು ಆಯ್ಕೆ ಮಾಡಿದೆ. ಈ ಹಿಂದೆ ಕೂಡ ಪುನೀತ್ ರಾಜ್‌ಕುಮಾರ್ ಎಲ್ಇಡಿ ಬಲ್ಪ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಕೆಪಿಟಿಸಿಎಲ್ ಹಮ್ಮಿಕೊಂಡಿದ್ದ ಹೊಸಬೆಳಕು ಜಾಹೀರಾತಿಗೆ ಪುನೀತ್ ರಾಜ್‌ಕುಮಾರ್‌ರನ್ನು ಆಯ್ಕೆ ಮಾಡಿಕೊಂಡಿತ್ತು. ಅಲ್ಲದೆ, ಕೆಎಂಎಫ್, ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಆರ್‌ಟಿಇ ಜಾಹೀರಾತಿನಲ್ಲಿ, ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿಯೂ ಅವರು ರಾಯಭಾರಿಯಾಗಿ ಕೆಲಸ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News