ಭಾಸ್ಕರ ಭಟ್
Update: 2019-12-15 14:54 GMT
ಉಡುಪಿ, ಡಿ.15: ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿ ಜನನಿ ಅಗ್ರ ಹಾರ ಭಾಸ್ಕರ ಭಟ್(64) ಇಂದು ಹೃದಯಾಘಾತದಿಂದ ನಿಧನರಾದರು.
ಕೊಡವೂರು ದೇವಳದ ಆಡಳಿತ ಮಂಡಳಿಯ ಮಾಜಿ ಸದಸ್ಯರು, ಕೊಡವೂರು ಯುವಕ ಮಂಡಲ, ಹಳೆವಿದ್ಯಾರ್ಥಿ ಸಂಘ, ಸಾರ್ವಜನಿಕ ಗಣೇಶೋತ್ಸವ ಸಮಿತಿ, ಸುಮನಸಾ ಕೊಡವೂರು, ಕೊಡವೂರು ಬ್ರಾಹ್ಮಣ ಸಭಾ ಮುಂತಾದ ಸಂಘ ಸಂಸ್ಥೆ ಗಳಲ್ಲಿ ಸಕ್ರಿು ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.