ಮಾದಕ ವಸ್ತು ಮಾರಾಟ ಆರೋಪ: ಓರ್ವನ ಬಂಧನ, 15 ಕೆಜಿ ಗಾಂಜಾ ಜಪ್ತಿ

Update: 2019-12-16 12:02 GMT

ಬೆಂಗಳೂರು, ಡಿ.16: ಹೊರ ರಾಜ್ಯಗಳಿಂದ ಮಾದಕ ವಸ್ತು ಗಾಂಜಾ ತಂದು, ನಗರದೆಲ್ಲೆಡೆ ಮಾರಾಟ ಮಾಡುತ್ತಿದ್ದ ಓರ್ವನನ್ನು ಬಂಧಿಸಿರುವ ಮಾರತ್‌ಹಳ್ಳಿ ಠಾಣಾ ಪೊಲೀಸರು 15 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

ಒರಿಸ್ಸಾದ ರಾಯ್‌ಗಡ್ ಜಿಲ್ಲೆಯ ಕೊಡಗುಲಾಮಿ ನಿವಾಸಿ ಕಿರದ್ ಮಿಶಾಲ್(35) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯು ಒರಿಸ್ಸಾದಿಂದ ಗಾಂಜಾವನ್ನು ಪೆಟ್ಟಿಗೆಯಲ್ಲಿ ತುಂಬಿ ವಾಸನೆ ಬರದಂತೆ ಸುಗಂಧ ದ್ರವ್ಯ ಸಿಂಪಡಿಸಿಕೊಂಡು ಪ್ರಯಾಣಿಕನ ವೇಷದಲ್ಲಿ ಕೆಆರ್‌ಪುರಂ ರೈಲು ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿಂದ ವೈಟ್ ಫೀಲ್ಡ್ ಮಾರತಹಳ್ಳಿ ವ್ಯಾಪ್ತಿಯಲ್ಲಿ ಮಾರಾಟ ಮಾಡಲು ಯತ್ನಿಸಿದಾಗ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News