ಕೆಪಿಎಲ್ ಬೆಟ್ಟಿಂಗ್ ಪ್ರಕರಣ: 'ನಟಿಯರ ವಿಚಾರಣೆ' ಬಗ್ಗೆ ಭಾಸ್ಕರ್ ರಾವ್ ಹೇಳಿದ್ದು ಹೀಗೆ...
Update: 2019-12-16 16:34 GMT
ಬೆಂಗಳೂರು, ಡಿ.16: ಕೆಪಿಎಲ್ ಬೆಟ್ಟಿಂಗ್ ಆರೋಪ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಶೀಘ್ರದಲ್ಲಿಯೇ ಕೆಲ ನಟಿಯರನ್ನು ವಿಚಾರಣೆಗೊಳಪಡಿಸಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ನಟಿಯ ವಿಚಾರಣೆ ಗೌಪ್ಯ ಸ್ಥಳದಲ್ಲಿ ನಡೆಸಲಾಗುವುದಿಲ್ಲ. ಈ ಸಂಬಂಧ ಆರೋಪಿಗಳಿಗೆ ಕಾನೂನು ರೀತಿಯ ನೋಟಿಸ್ ಜಾರಿಗೊಳಿಸಲಾಗುವುದು. ಬಳಿಕ, ಅಧಿಕೃತವಾಗಿಯೇ ವಿಚಾರಣೆಗೊಳಪಡಿಸಿ, ಅವರ ಹೇಳಿಕೆ ದಾಖಲು ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರ ವಿರುದ್ಧ ಪೊಲೀಸರು ದಿಟ್ಟ ಕ್ರಮ ಕೈಗೊಳ್ಳಲಿದ್ದಾರೆ ಎಂದು ಭಾಸ್ಕರ್ ರಾವ್ ನುಡಿದರು.