ಸಿಎಎ,ಎನ್‌ಆರ್‌ಸಿ ವಿರೋಧಿಗಳನ್ನು ಒಂದು ಗಂಟೆಯಲ್ಲಿ ನಿರ್ನಾಮ ಮಾಡಲಾಗುವುದು: ಬಿಜೆಪಿ ಶಾಸಕ

Update: 2019-12-25 15:54 GMT

ಚಂಡಿಗಡ,ಡಿ.25:ಹರ್ಯಾಣದ ಕೈಥಾಲ್ ಕ್ಷೇತ್ರದ ಬಿಜೆಪಿ ಶಾಸಕ ಲೀಲಾರಾಮ ಗುರ್ಜರ್ ಅವರು ಸಿಎಎ ಮತ್ತು ಎನ್‌ಆರ್‌ಸಿಯನ್ನು ವಿರೋಧಿಸುತ್ತಿರುವವರನ್ನು ಒಂದು ಗಂಟೆಯಲ್ಲಿ ನಿರ್ನಾಮ ಮಾಡಲಾಗುವುದು ಎಂದು ಹೇಳಿದ್ದಾರೆ. ಅವರ ಹೇಳಿಕೆ ವಿವಾದ ಸೃಷ್ಟಿಸಿದೆ.

ಸಿಎಎ ಅನ್ನು ಬೆಂಬಲಿಸಿ ತನ್ನ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು,ಭಾರತವು ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು ಮತ್ತು ಮನಮೋಹನ ಸಿಂಗ್ ಹಾಗೂ ಗಾಂಧಿಯವರದ್ದಲ್ಲ, ಅದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಅವರದ್ದಾಗಿದೆ. ಸೂಚನೆ ದೊರೆತರೆ ಕಾಯ್ದೆ ವಿರೋಧಿಗಳನ್ನು ಒಂದು ಗಂಟೆಯೊಳಗೆ ನಿರ್ನಾಮಗೊಳಿಸುತ್ತೇವೆ ಎಂದರು.

ಸಿಎಎ ಬಗ್ಗೆ ಪ್ರಸ್ತಾಪಿಸಿರುವ ಗುರ್ಜರ್,ಇದು ಮೋದಿಯವರ ಉಪಕ್ರಮವಾಗಿದೆ. ತಾವು ಈ ದೇಶವನ್ನು ತೊರೆಯುವಂತೆ ಮಾಡಲು ಪಿತೂರಿ ನಡೆಯುತ್ತಿದೆ ಎಂದು ಮುಸ್ಲಿಮರು ಭಾವಿಸಿದ್ದರೆ ಇದರಲ್ಲಿ ಅಂತಹುದೇನೂ ಇಲ್ಲ. ಆದರೆ ಅಕ್ರಮವಾಗಿ ದೇಶವನ್ನು ಪ್ರವೇಶಿಸಿರುವವರು ತೊಲಗಲೇಬೇಕು ಎಂದಿದ್ದಾರೆ.

ಗುರ್ಜರ್ ಅಕ್ಟೋಬರ್‌ನಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೆವಾಲಾರನ್ನು ಸೋಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News