ಅಂಚೆ ಕಚೇರಿಗೆ ಕನ್ನ ಹಾಕಿದವನಿಗೆ ಸಿಕ್ಕಿದ್ದೇನು ಗೊತ್ತೇ?

Update: 2020-01-01 11:32 GMT
Photo: hindustantimes.com

ಹೊಸದಿಲ್ಲಿ : ಪೂರ್ವ ದಿಲ್ಲಿಯ ಮಾನಸರೋವರ್  ಪಾರ್ಕ್ ಪ್ರದೇಶದ ಅಂಚೆ ಕಚೇರಿಯ ಗೋಡೆಗೆ ಕನ್ನ ಕೊರೆದು ಒಳನುಗ್ಗಿದ ಕಳ್ಳನೊಬ್ಬ ಕೇವಲ ರೂ. 487 ನಗದಿನೊಂದಿಗೆ ನಿರಾಸೆಯೊಂದಿಗೆ ಅಲ್ಲಿಂದ ಕಾಲ್ಕೀಳುವಂತಾದ ಘಟನೆ ನಡೆದಿದೆ. ಆದರೆ ಆ ಕಳ್ಳನ ಕಣ್ಣಿಗೆ ಕಚೇರಿಯಲ್ಲಿದ್ದ ಇನ್ನೊಂದು ಚೀಲದಲ್ಲಿದ್ದ ರೂ. 5,000 ನಗದು ಬಿದ್ದಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಚೆ ಕಚೇರಿಯ ಗೋಡೆಯನ್ನು ಎರಡು ಅಡಿ ಅಗಲ ಹಾಗೂ ಒಂದು ಅಡಿ ಉದ್ದ ಕೊರೆಯಲಾಗಿರುವುದರಿಂದ ಸಪೂರ ದೇಹದ ಅಥವಾ ಅಪ್ರಾಪ್ತನೊಬ್ಬ ಕಚೇರಿಯೊಳಗೆ ನುಗ್ಗಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಮಾನಸರೋವರ್ ಪಾರ್ಕ್ ಪ್ರದೇಶದ ವಸತಿ ಸಮುಚ್ಛಯದ ಹಳೇ ಕಟ್ಟಡದಲ್ಲಿ ಈ ಅಂಚೆ ಕಚೇರಿ ಕಾರ್ಯಾಚರಿಸುತ್ತಿದ್ದು ಅದರ ಎದುರಿನ ಕಟ್ಟಡದಲ್ಲಿ ಕೆಲವೊಂದು ಮಳಿಗೆಗಳಿವೆ.

ಅಂಚೆ ಕಚೇರಿಯಲ್ಲಿ ಸೀಸಿಟಿವಿ ಕ್ಯಾಮರಾ ಇಲ್ಲದೇ ಇದ್ದುದರಿಂದ ಪೊಲೀಸರಿಗೆ ರೂ. 487 ನಗದು ಕದ್ದ ಕಳ್ಳನ ಸುಳಿವು ಇನ್ನೂ ಸಿಕ್ಕಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News