ಭದ್ರತಾ ಸಿಬ್ಬಂದಿಯ ಹತ್ಯೆ
Update: 2020-01-02 15:19 GMT
ಬೆಂಗಳೂರು, ಜ.2: ಕಂಪೆನಿಯೊಂದರ ಭದ್ರತಾ ಸಿಬ್ಬಂದಿಯನ್ನು ಸಹೋದ್ಯೋಗಿಯೇ ಹತ್ಯೆ ಮಾಡಿರುವ ಘಟನೆ ಪೀಣ್ಯದ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಬ್ಯಾಡರಹಳ್ಳಿಯ ತಪ್ಪೇಸ್ವಾಮಿ(62) ಕೊಲೆಯಾದ ವ್ಯಕ್ತಿ. ಬಿಹಾರ ಮೂಲದ ಆರೋಪಿ ಸಂಜಯ್ ಯಾದವ್(55)ನನ್ನು ಬಂಧಿಸಲಾಗಿದೆ.
ಪೀಣ್ಯದ ಕೈಗಾರಿಕಾ ಪ್ರದೇಶದ 18ನೇ ಕ್ರಾಸ್ನ ಜನರೇಟರ್ ಸೋಲಾರ್ ಕಾರ್ಖಾನೆಯೊಂದರಲ್ಲಿ ತಿಪ್ಪೇಸ್ವಾಮಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದು, ಅದೇ ಕಾರ್ಖಾನೆಯಲ್ಲಿ ಸಂಜಯ್ ಯಾದವ್ ಕೂಲಿ ಕೆಲಸ ಮಾಡುತ್ತಿದ್ದ. ಕುಡಿತದ ಅಮಲಿನಲ್ಲಿದ್ದ ಆರೋಪಿ ಸಂಜಯ್ ಯಾದವ್, ಭದ್ರತಾ ಸಿಬ್ಬಂದಿ ತಿಪ್ಪೇಸ್ವಾಮಿಯ ಎದೆಗೆ ಬಲವಾಗಿ ಗುದ್ದಿ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ತಿಪ್ಪೇಸ್ವಾಮಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.