ಜ.17ರಂದು ಮೂರು ಪುಸ್ತಕಗಳ ಬಿಡುಗಡೆ

Update: 2020-01-16 17:44 GMT

ಬೆಂಗಳೂರು: ಆಕೃತಿ ಪ್ರಕಾಶನ ಹಾಗೂ ಸಂಸ ಥಿಯೇಟರ್ ವತಿಯಿಂದ ಲೇಖಕರಾದ ವಿ.ಆರ್.ಕಾರ್ಪೆಂಟರ್‌ರ ‘ಬ್ರಾಹ್ಮಿನ್ ಕೆಫೆ’, ಚಲಂ ಹಾಡ್ಲಹಳ್ಳಿಯವರ ‘ಎಲ್ಲ ಮೀನುಗಳು ಗಾಳಕ್ಕೆ ಸಿಕ್ಕುವುದಿಲ್ಲ’ ಹಾಗೂ ಬೇಲೂರು ರಘುನಂದನ್‌ರವರ ‘ರೂಪರೂಪಗಳ ದಾಟಿ ಮತ್ತು ಬೆಳಕಿನ ಕಿಂಡಿಗಳು’ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಜ.17ರಂದು ಸಂಜೆ 6ಕ್ಕೆ ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಹಿರಿಯ ಲೇಖಕ ಡಾ.ನಟರಾಜ್ ಹುಳಿಯಾರ್ ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ. ಹಿರಿಯ ನ್ಯಾಯವಾದಿ ಸಿ.ಎಸ್.ದ್ವಾರಕಾನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಚಿಂತಕ ಬಿ.ಆರ್.ಭಾಸ್ಕರ್ ಪ್ರಸಾದ್, ಲೇಖಕ ವಿ.ಎಂ.ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕೃತಿಗಳ ಕುರಿತು ಲೇಖಕಿ ಸಂಯುಕ್ತಾ ಪುಲಿಗಲ್, ಪ್ರಾಧ್ಯಾಪಕ ಪ್ರಕಾಶ್ ಮಂಟೇದ, ಪತ್ರಕರ್ತೆ ಪದ್ಮಾ ಶಿವಮೊಗ್ಗ ಮಾತನಾಡಲಿದ್ದಾರೆ. ಈ ವೇಳೆ ಕೃತಿಗಳ ಲೇಖಕರು, ಆಕೃತಿ ಪ್ರಕಾಶನದ ಗುರುಪ್ರಸಾದ್, ಸಂಸ ಸುರೇಶ್ ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News