ಪ್ರಮಾಣ ವಚನ ಸ್ವೀಕರಿಸಿದ ಬಿಬಿಎಂಪಿ ನಾಮ ನಿರ್ದೇಶಿತ ಸದಸ್ಯರು

Update: 2020-01-27 13:08 GMT

ಬೆಂಗಳೂರು, ಜ.27: ರಾಜ್ಯ ಸರಕಾರ ಬಿಬಿಎಂಪಿಗೆ 20 ಮಂದಿ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು, ಅವರಿಗೆ ಮೇಯರ್ ಗೌತಮ್ ಕುಮಾರ್ ಸೋಮವಾರ ಬಿಬಿಎಂಪಿಯ ಕೇಂದ್ರ ಕಚೇರಿಯಲ್ಲಿ ಪ್ರಮಾಣ ವಚನ ಬೋಧಿಸಿದರು.

ನಾಮ ನಿರ್ದೇಶಿತ ಸದಸ್ಯರು: ಸಿ. ಜಯಕುಮಾರ್, ಆರ್.ಗೋಪಿನಾಥ್, ಸಿ.ಎಂ. ಮಂಜುನಾಥ್, ಸುಧೀರ್, ಸರ್ಧಾರ್ ಮಲ್ ಸುರಾನ, ಪಿ.ಮಂಜುನಾಥ್, ಟಿ.ಎಸ್. ಗಂಗರಾಜು, ಬಿ.ರಮೇಶ್, ಎಚ್.ಕೆ. ಮುತ್ತಪ್ಪ, ವಿ.ವಿ ವಿನಾಯಕ, ಬಿ.ಸಿ.ಸುಜಾತ ರಾಣಿ, ಕೃಷ್ಣಮೂರ್ತಿ, ಎಂ.ರಾಮಮೂರ್ತಿ, ಉಮಾ ಮಗೇಶ್, ಎಂ.ಶ್ರೀರಾಮ, ಕೆ.ವೆಂಕಟೇಶ್, ಎ.ನಾರಾಯಣಸ್ವಾಮಿ, ಎ.ಎಂ. ಸತ್ಯರಾಜು, ಕೆ.ಎನ್. ಶ್ರೀಕಂಠಯ್ಯ, ರಮೇಶ್ ರಾಜು ಅವರು ನಾಮ ನಿರ್ದೇಶಿತ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ರಾಜ್ಯ ಸರಕಾರ ಬಿಬಿಎಂಪಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ಆಯ್ಕೆ ಆಗಿರುವ 20 ಮಂದಿಯ ಅಧಿಕಾರದ ಅವಧಿ ಪ್ರಸ್ತುತ ಜಾರಿಯಲ್ಲಿರುವ ಕೌನ್ಸಿಲ್ ಅವಧಿಯು ಮುಕ್ತಾಯವಾಗುವವರೆಗೆ ಇರಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News