ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

Update: 2020-01-27 13:10 GMT

ಬೆಂಗಳೂರು, ಜ.27: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯೊಬ್ಬಾಕೆಯ ಮೃತ ದೇಹ ಪತ್ತೆಯಾಗಿರುವ ಘಟನೆ ಇಲ್ಲಿನ ಸರ್ಜಾಪುರ ಬಳಿಯ ಮಾದಪ್ಪನdeaಹಳ್ಳಿಯಲ್ಲಿ ನಡೆದಿದೆ.

ಮಾದಪ್ಪನಹಳ್ಳಿಯ ನಿವಾಸಿ ಜಯಶ್ರೀ ಮೃತ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾದಪ್ಪನಹಳ್ಳಿಯ ಸುಬ್ರಮಣಿಯನ್ನು 2 ವರ್ಷಗಳ ಹಿಂದೆ ಹೊಸಕೋಟೆಯ ಮೃತ ಜಯಶ್ರೀ ವಿವಾಹವಾಗಿದ್ದರು. ಸಾವಿಗೆ ಕಾರಣ ಸದ್ಯಕ್ಕೆ ತಿಳಿದುಬಂದಿಲ್ಲ.

ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸರ್ಜಾಪುರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News