ದಾಮೋದರ್ ಕುಂದರ್

Update: 2020-01-28 17:25 GMT

ಮಂಗಳೂರು, ಜ.28: ಮಲ್ಪೆ ಸಮೀಪದ ಕೊಪ್ಪಳ ತೋಟದ ನಿವಾಸಿ, ಉದ್ಯಮಿ, ಸಮಾಜ ಸೇವಕ ದಾಮೋದರ್ ಸಿ. ಕುಂದರ್ (71) ಮುಂಬೈಯಲ್ಲಿ ನಿಧನರಾದರು.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಭಾರತ್ ಕೋ-ಆಪ್‌ರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ, ಬ್ರಹ್ಮಶ್ರೀ ನಾರಾಯಣಗುರು ಚಾರೀಟೆಬಲ್ ಟ್ರಸ್ಟ್ ಗೌರವಾಧ್ಯ್ಷಕ್ಷರಾಗಿದ್ದ ಕುಂದರ್, ಮುಂಬೈ ಹಾಗೂ ಉಡುಪಿಯ ಸಿಲ್ವರ್ ಕೊಯಿನ್ ರೇಸ್ಟೊರೆಂಟ್ ಮತ್ತು ಮುಂಬೈಯಲ್ಲಿ ಸ್ಟೆರ್ಲಿಂಗ್ ಟ್ರಾವೆಲ್ ಎಜೆನ್ಸಿಯ ಮಾಲಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ