​ಎಫ್. ಅಬ್ಬಾಸ್

Update: 2020-01-28 18:19 GMT

ಫರಂಗಿಪೇಟೆ, ಜ. 28: ಹಿರಿಯ ಬಿಜೆಪಿ ಕಾರ್ಯಕರ್ತ, ಕೃಷಿಕ ಎಫ್. ಅಬ್ಬಾಸ್(80 ) ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಿಧನರಾದರು.

ಪತ್ನಿ , ಮೂವರು ಪುತ್ರಿಯರು ಸಹಿತ ಅಪಾರ ಬಂಧು ಬಳಗ, ಅಭಿಮಾನಿಗಳನ್ನು ಅಗಲಿದ್ದಾರೆ. ಅಬ್ಬಾಸ್ ಅವರು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ತನ್ನ ಇಳಿ ವಯಸ್ಸಿನಲ್ಲಿ ಕೃಷಿ ಮತ್ತು ಹೈನುಗಾರಿಕೆಯನ್ನು ಕೈಗೊಂಡಿದ್ದರು. ಆರೆಸ್ಸೆಸ್‌ನ ಪುತ್ತೂರು ಜಿಲ್ಲಾ ಸಂಘ ಚಾಲಕ ಕೊಡ್ಮಾಣು ಕಾಂತಪ್ಪ ಶೆಟ್ಟಿ , ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ ಮಾರಿಪಳ್ಳ , ಪುದು ಪಂಚಾಯತ್ ಮಾಜಿ ಅಧ್ಯಕ್ಷ ಅಕ್ತರ್ ಹುಸೈನ್, ಅಶ್ರಫ್ ಫರಂಗಿಪೇಟೆ, ವಿ ಎಚ್ ಕೆರೀಂ , ಪುಂಚಮೆ ಪದ್ಮನಾಭ ಶೆಟ್ಟಿ , ದಿನೇಶ್ ಶೆಟ್ಟಿ ಕೊಟ್ಟಿಂಜ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ