ಕೆ.ರಹಮತುಲ್ಲಾ ಸಾಹೇಬ್

Update: 2020-01-31 16:25 GMT

ಕುಂದಾಪುರ, ಜ.31: ಕುಂದಾಪುರ ತಾಲೂಕಿನ ಕಾವ್ರಾಡಿ ನಿವಾಸಿ ಕೆ. ರಹಮತುಲ್ಲಾ ಸಾಹೇಬ್(68) ಅವರು ಗುರುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು. ಕೆನರಾ ಬ್ಯಾಂಕ್‌ನ ಮಾಜಿ ಉದ್ಯೋಗಿಯಾಗಿದ್ದ ಅವರು ಕುಂದಾಪುರ, ಬೆಂಗಳೂರು, ಗಂಗೊಳ್ಳಿ, ನೇರಳಕಟ್ಟೆ ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಕಾವ್ರಾಡಿ ಜಾಮೀಯ ಮಸೀದಿಯ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸುತಿದ್ದ ಅವರು ಸ್ಥಳೀಯವಾಗಿ ಜನಮನ್ನಣೆ ಗಳಿಸಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ