ಸ್ಯಾನಿಟರಿ ಕಾಮಗಾರಿ ವೇಳೆ ಪಾಯದ ಮಣ್ಣು ಕುಸಿತ: ಇಬ್ಬರು ಕಾರ್ಮಿಕರು ಮೃತ್ಯು

Update: 2020-02-10 18:23 GMT

ಬೆಂಗಳೂರು, ಫೆ.10: ಸ್ಯಾನಿಟರಿ ಕಾಮಗಾರಿ ನಡೆಸುತ್ತಿದ್ದ ವೇಳೆ ಪಾಯದ ಮಣ್ಣು ಕುಸಿತಗೊಂಡ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು 40 ವರ್ಷದ ಮಹಂತೇಶ್, 36 ವರ್ಷದ ಕರಿಯಪ್ಪಎಂದು ಗುರುತಿಸಲಾಗಿದೆ. ಕೆಂಗೇರಿಯ ಸೂಲಿಕೆರೆಯ ಬಳಿಯಲ್ಲಿ ಸ್ಯಾನಿಟರಿ ಕಾಮಗಾರಿಯಲ್ಲಿ ನಾಲ್ವರು ಕಾರ್ಮಿಕರು ತೊಡಗಿದ್ದರು. ಈ ವೇಳೆ ಪಾಯದ ಮಣ್ಣು ಏಕಾಏಕಿ ಕುಸಿದ ಪರಿಣಾಮ ನಾಲ್ವರು ಕಾರ್ಮಿಕರು ಮಣ್ಣಿನಡಿ ಸಿಲುಕಿಕೊಂಡಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಸ್ಥಳೀಯರು ಇಬ್ಬರು ಕಾರ್ಮಿಕರನ್ನು ರಕ್ಷಿಸಿ ನಂತರ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News