ಕಾನೂನು ಕೋಶ ಮುಖ್ಯಸ್ಥರ ಬದಲಾವಣೆಗೆ ಬಿಬಿಎಂಪಿ ಮೇಯರ್ ಪತ್ರ

Update: 2020-02-11 18:18 GMT

ಬೆಂಗಳೂರು, ಫೆ.11: ಬಿಬಿಎಂಪಿ ಕಾನೂನು ಕೋಶದ ಮುಖ್ಯಸ್ಥ ಕೇಶವ ದೇಶಪಾಂಡೆ ಅವಧಿ ಮುಕ್ತಾಯಗೊಂಡು ಹೆಚ್ಚುವರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರೂ ಅವರನ್ನು ಬದಲಾಯಿಸಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯಸ್ಥರ ಬದಲಾವಣೆ ಮಾಡುವಂತೆ ಮೇಯರ್ ಗೌತಮ್ ಕುಮಾರ್ ಜೈನ್ ಪತ್ರದ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಈ ಪತ್ರಕ್ಕೆ ಕ್ಯಾರೆ ಎನ್ನದೇ ನಿರ್ಲಕ್ಷಿಸಿದ್ದಾರೆ ಎನ್ನಲಾಗಿದೆ.

ಪಾಲಿಕೆ ಕಾನೂನು ಕೋಶದ ಮುಖ್ಯಸ್ಥರಾಗಿ 3 ವರ್ಷಗಳು ಕಾರ್ಯ ನಿರ್ವಹಿಸಬಹುದು. ಅಲ್ಲದೆ, ಅವರ ಕಾರ್ಯದಕ್ಷತೆ ಗಮನಿಸಿ, ಇನ್ನೂ ಹೆಚ್ಚುವರಿ ಎರಡು ವರ್ಷ ಮುಂದುವರಿಸಬಹುದು. ಆದರೆ, ಕೇಶವ ದೇಶಪಾಂಡೆ ಎಂಟು ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಇವರ ಅಧಿಕಾರದ ಅವಧಿಯಲ್ಲಿ ಪಾಲಿಕೆ ಹಲವು ಪ್ರಕರಣಗಳಲ್ಲಿ ಸೋಲು ಕಂಡಿದೆ. ಆದರೂ, ಬದಲಾವಣೆಗೆ ಮೇಯರ್ ಪತ್ರ ಬರೆದರೂ ಅಧಿಕಾರಿಗಳು ಈ ಕಡೆಗೆ ಗಮನ ನೀಡುತ್ತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News