ಶಂಕರನಾರಾಯಣ ಭಟ್
Update: 2020-02-17 12:34 GMT
ಕೊಣಾಜೆ : ಮುಡಿಪುವಿನ ಕುರ್ನಾಡು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ನಿವೃತ್ತ ಕನ್ನಡ ಶಿಕ್ಷಕ, ಬಂಟ್ವಾಳ ತಾಲೂಕು ಫಜೀರು ತಾಲೂಕು ಪಾದಲ್ಪಾಡಿ ನಿವಾಸಿ ಶಂಕರನಾರಾಯಣ ಭಟ್ (82) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಸ್ವಗೃಹದಲ್ಲಿ ಶನಿವಾರ ನಿಧನರಾದರು.
39 ವರ್ಷಗಳ ಕಾಲ ಸರ್ಕಾರಿ ಶಿಕ್ಷಕರಾಗಿದ್ದ ಅವರು ವಿವಿಧ ಸಂಸ್ಥೆಗಳಾದ ಸರ್ಕಾರಿ ಹಿ.ಪ್ರಾ.ಶಾಲೆ ನರಿಂಗಾನ, ಸರ್ಕಾರಿ ಶಾಲೆ ಕೊಡ್ಮಣ್ಣು, ಸರ್ಕಾರಿ ಶಾಲೆ ಸುಜೀರು, ಸರ್ಕಾರಿ ಹಿ.ಪ್ರಾ.ಶಾಲೆ ಪಾಣೆಲ, ಸರ್ಕಾರಿ ಪ್ರೌಢಶಾಲೆ ಪೆರ್ಮನ್ನೂರು ಮತ್ತಿತರ ಕಡೆ ಕರ್ತವ್ಯ ನಿರ್ವಹಿಸಿದ್ದರು. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.