ವಿಧಾನಸೌಧದಲ್ಲಿ ಪೊಲೀಸ್ ಆಯುಕ್ತರಿಂದಲೇ ಕಾನೂನು ಉಲ್ಲಂಘನೆ

Update: 2020-02-17 15:16 GMT

ಬೆಂಗಳೂರು, ಫೆ.17: ನಗರ ಪೊಲೀಸ್ ಆಯುಕ್ತ ಭಾಸ್ಕರ್‌ ರಾವ್ ಕಾನೂನು ಉಲ್ಲಂಘಿಸಿ ಸಮವಸ್ತ್ರದಲ್ಲಿಯೇ ವಿಧಾನಸಭೆಯನ್ನು ಪ್ರವೇಶಿಸಿರುವ ಘಟನೆ ನಡೆದಿದೆ. 

ಸೋಮವಾರ ಬೆಳಗ್ಗೆ ರಾಜ್ಯಪಾಲ ವಜೂಭಾಯಿ ವಾಲಾ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ವಿಧಾನಸಭೆಯ ಸಭಾಂಗಣದ ಒಳಗಡೆ ಪ್ರವೇಶಿಸಿದರು. ಇವರ ಹಿಂದಿಯೇ ಆಯುಕ್ತ ಭಾಸ್ಕರ್‌ ರಾವ್ ಪ್ರವೇಶಿಸಲು ಮುಂದಾದಾಗ ಮಾರ್ಷಲ್‌ಗಳು ತಡೆದರು. ತಮ್ಮನ್ನು ತಡೆದ ಬಗ್ಗೆ ಭಾಸ್ಕರ್‌ ರಾವ್ ಮಾರ್ಷಲ್‌ಗಳ ಬಳಿ ಪ್ರಶ್ನಿಸಿದರು. ಈ ವೇಳೆ ಪೊಲೀಸ್ ಸಮವಸ್ತ್ರದಲ್ಲಿ ವಿಧಾನಸಭೆಯ ಪ್ರವೇಶಕ್ಕೆ ಇರುವ ನಿರ್ಬಂಧಗಳನ್ನು ಆಯುಕ್ತರಿಗೆ ವಿವರಿಸಲಾಯಿತು. ಆದರೂ, ಪೊಲೀಸ್ ಆಯುಕ್ತರು ಲೆಕ್ಕಿಸದೆ ವಿಧಾನಸಭೆಯ ಒಳಗೆ ಪ್ರವೇಶ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜನಪ್ರತಿನಿಧಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News