ಕೆ.ಟಿ.ಶೆಟ್ಟಿ

Update: 2020-02-18 14:31 GMT

ಹೆಬ್ರಿ, ಫೆ.18: ಶಿವಪುರದ ನಿವಾಸಿ ಚಿಕ್ಕಮಗಳೂರಿನ ಖ್ಯಾತ ಉದ್ಯಮಿ ಸಮಾಜಸೇವಕ ಕೆ.ತುಕರಾಮ ಶೆಟ್ಟಿ ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ ಪುತ್ರ ಚಿಕ್ಕಮಗಳೂರು ಜಿಲ್ಲಾ ಪ್ರಾದೇಶಿಕ ಭವಿಷ್ಯನಿಧಿ ಆಯುಕ್ತರಾದ ಸಚಿನ್ ಶೆಟ್ಟಿ ಅವರನ್ನು ಅಗಲಿದ್ದಾರೆ.

ಚಿಕ್ಕಮಗಳೂರಿನಲ್ಲಿ ಅಟೋಮೋಬೈಲ್ ಹಾಗೂ ವಸತಿಗೃಹ ಉದ್ಯಮ ನಡೆಸುತಿದ್ದ ಇವರು ಚಿಕ್ಕಮಗಳೂರು ಬಂಟರ ಸಂಘದ ಅಧ್ಯಕ್ಷರಾಗಿ, ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿ ಸೇವೆ ಸಲ್ಲಿಸುತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ