ಬಿಎಂಟಿಸಿ ವೋಲ್ವೋ ಬಸ್ ಢಿಕ್ಕಿ: ಅಧಿಕಾರಿ ಮೃತ್ಯು

Update: 2020-02-18 17:21 GMT

ಬೆಂಗಳೂರು, ಫೆ.18: ಬಿಎಂಟಿಸಿ ವೋಲ್ವೋ ಬಸ್ ಢಿಕ್ಕಿ ಹೊಡೆದು ಬೈಕ್‌ನಲ್ಲಿ ಸಾಗುತ್ತಿದ್ದ ಖಾಸಗಿ ಕಂಪೆನಿಯ ಮಾನವ ಸಂಪನ್ಮೂಲ ಅಧಿಕಾರಿ (ಎಚ್‌ಆರ್) ಸಾವನ್ನಪ್ಪಿರುವ ಘಟನೆ ಎಚ್‌ಎಸ್‌ಆರ್‌ಲೇಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಎಚ್‌ಎಸ್‌ಆರ್‌ಲೇಔಟ್ ನಿವಾಸಿ ವಿಷ್ಣು ತೀರ್ಥ (31) ಮೃತ ಅಧಿಕಾರಿ ಎಂದು ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ ಮೂಲದ ವಿಷ್ಣು ತೀರ್ಥ ಅವರು ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಖಾಸಗಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸೋಮವಾರ ಸಂಜೆ ಇಬ್ಬಲೂರು ಜಂಕ್ಷನ್ ಕಡೆಗೆ ವಿಷ್ಣು ತೀರ್ಥ ಅವರು ಬೈಕ್‌ನಲ್ಲಿ ಹೋಗುತ್ತಿದ್ದಾಗ ಬಿಎಂಟಿಸಿ ವೋಲ್ವೋ ಬಸ್ ಢಿಕ್ಕಿ ಹೊಡೆದಿದೆ.

ಢಿಕ್ಕಿಯ ರಭಸಕ್ಕೆ ಕೆಳಗೆ ಬಿದ್ದು ವಿಷ್ಣು ತೀರ್ಥ ಅವರ ತಲೆಯ ಮೇಲೆ ಹಿಂಭಾಗದ ಬಸ್‌ನ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News