ಸೆಮಿಫೈನಲ್‌ಗೆ ರಾಹುಲ್ ಲಭ್ಯ

Update: 2020-02-24 18:50 GMT

ಬೆಂಗಳೂರು, ಫೆ.24: ಬಂಗಾಳ ವಿರುದ್ಧ ಕೋಲ್ಕತಾದಲ್ಲಿ ಫೆ.29ಕ್ಕೆ ನಡೆಯಲಿರುವ ದ್ವಿತೀಯ ಸೆಮಿ ಫೈನಲ್‌ನಲ್ಲಿ ಕರ್ನಾಟಕದ 15 ಸದಸ್ಯರುಗಳನ್ನು ಒಳಗೊಂಡ ರಣಜಿ ತಂಡಕ್ಕೆ ಕೆ.ಎಲ್.ರಾಹುಲ್ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಕರ್ನಾಟಕ ತಂಡದ ಬ್ಯಾಟಿಂಗ್ ಮತ್ತಷ್ಟು ಬಲಶಾಲಿಯಾಗಿದೆ. ಕ್ವಾರ್ಟರ್ ಫೈನಲ್‌ನಲ್ಲಿ ಮನೀಷ್ ಪಾಂಡೆ ಸೇರ್ಪಡೆಯೊಂದಿಗೆ ಕರ್ನಾಟಕ ಈಗಾಗಲೇ ಬಲಿಷ್ಠವಾಗಿದೆ.

ರಾಹುಲ್ ಹಾಗೂ ಮನೀಷ್ ನ್ಯೂಝಿಲ್ಯಾಂಡ್‌ನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿ ಆಡಿ ದೇಶಕ್ಕೆ ವಾಪಸಾಗಿದ್ದರು. ರಾಹುಲ್ ಕ್ವಾರ್ಟರ್ ಫೈನಲ್‌ನಲ್ಲಿ ಆಡದೇ ವಿಶ್ರಾಂತಿ ಪಡೆದಿದ್ದರು. ಪಾಂಡೆ ಅಂತಿಮ-8ರ ಸುತ್ತಿನ ಪಂದ್ಯದಲ್ಲಿ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News