ಪಿ.ಕೆ.ಶ್ರೀಧರ ಆಚಾರ್ಯ

Update: 2020-02-25 16:38 GMT

ಉಡುಪಿ, ಫೆ.25: ಕಳೆದ 35 ವರ್ಷಗಳಿಂದ ಪೌರೋಹಿತ್ಯ ವೃತ್ತಿಯಲ್ಲಿ ನಿರತರಾಗಿದ್ದು, ಅವಿಭಜಿತ ದ.ಕ.ಜಿಲ್ಲೆಯಲ್ಲಿ ವಿಶ್ವಬ್ರಾಹ್ಮಣ ಸಮಾಜದ ಎಲ್ಲಾ ಪುರೋಹಿತರನ್ನು ಒಗ್ಗೂಡಿಸಿ ‘ವಿಶ್ವ ವೈದಿಕಾ ಸಭಾ’ವನ್ನು ಸ್ಥಾಪಿಸಿದ್ದ ಪುರೋಹಿತ ಪಿ.ಕೆ.ಶ್ರೀಧರ ಆಚಾರ್ಯ ಇವರು ಅಲ್ಪಕಾಲದ ಅಸೌಖ್ಯದ ಬಳಿಕ ಇಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜ್ಯೋತಿಷ್ಯ ವಿದ್ವಾನ್ ಉದ್ಯಾವರ ವಿಶ್ವನಾಥ ಆಚಾರ್ಯರ ಶಿಷ್ಯರಾಗಿದ್ದ ಇವರು ತಾಯಿ, ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಗಳನ್ನು ಅಗಲಿದ್ದಾರೆ.

ವಿಶ್ವಕರ್ಮ ಪೂಜಾ ಪದ್ಧತಿ ಸೇರಿದಂತೆ ಹಲವು ಧಾರ್ಮಿಕ ಪುಸ್ತಕಗಳನ್ನು ಪ್ರಕಟಿಸಿದ್ದ ಇವರು ಸಂಸ್ಕೃತ, ಜ್ಯೋತಿಷ್ಯ, ಮುದ್ರೆಗಳ ಬಗ್ಗೆ ಅಪಾರ ಜ್ಞಾನ ಹೊಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ