ಅಬ್ಬಾಸ್ ಅರಫಾ

Update: 2020-03-02 17:14 GMT

ಪುತ್ತೂರು: ರಾಮಕುಂಜ ಗ್ರಾಮದ ಆತೂರು ನಿವಾಸಿ, ಎಸ್.ಕೆ.ಎಸ್.ಎಸ್.ಎಫ್. ಆತೂರು ಘಟಕದ ಖಜಾಂಚಿಯೂ ಆಗಿರುವ ಬಿ.ಕೆ. ಅಬ್ಬಾಸ್ ಅರಫ ಹೃದಯಾಘಾತದಿಂದ ರವಿವಾರ ರಾತ್ರಿ ನಿಧನರಾದರು.

ಅರಫಾ ಅಬ್ಬಾಸ್ ಅವರು ಆತೂರು ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯರಾಗಿ, ಖಾದಿಮುಲ್ ಇಸ್ಲಾಂ ಯಂಗ್‍ಮೆನ್ಸ್ ಮೊದಲಾದ ಸ್ಥಳೀಯ ಸಂಘಟನೆಗಳಲ್ಲಿ ತೊಡಗಿಸಿಕೊಂಡು ಚಿರಪರಿಚಿತಾಗಿದ್ದರು.

ಇತ್ತೀಚಿನ ಕೆಲ ವರ್ಷಗಳಿಂದ ಮೈಸೂರುನಲ್ಲಿ ಉದ್ಯಮವೊಂದನ್ನು ಆರಂಭಿಸಿದ್ದರು. ಮನೆಯ ಮುಂದೆ ಕಟ್ಟಡ ಕಾಮಗಾರಿ ನಡೆಯುವ ಸಲುವಾಗಿ ಕಳೆದ 25 ದಿನಗಳ ಹಿಂದೆ ಊರಿಗೆ ಬಂದು ಇಲ್ಲಿನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು.

ಮೃತರು ಪತ್ನಿ ಮೂವರು ಪುತ್ರರನ್ನು ಅಗಲಿದ್ದಾರೆ. ಆತೂರು ಮಸೀದಿ ವಠಾರದಲ್ಲಿ ಮೃತರ ಧಫನ ಕಾರ್ಯ ನಡೆಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ