ಬೆಂಗಳೂರು: ಹಣ ಪಡೆದುಕೊಳ್ಳಲು ಅವಕಾಶ ಕಲ್ಪಿಸಲು ಒತ್ತಾಯ; ಬ್ಯಾಂಕ್ ಮುಂದೆ ಗ್ರಾಹಕರ ಪ್ರತಿಭಟನೆ

Update: 2020-03-07 17:10 GMT

ಬೆಂಗಳೂರು, ಮಾ.7: ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದಲ್ಲಿರುವ ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ ಹೂಡಿಕೆ ಮಾಡಿದ ಹಣ ಪಡೆದುಕೊಳ್ಳಲು ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಹಕರು ಪ್ರತಿಭಟನೆ ನಡೆಸಿದರು.

ಶನಿವಾರ ಬ್ಯಾಂಕ್ ಮುಂದೆ ಜಮಾವಣೆಗೊಂಡ ನೂರಾರು ಸದಸ್ಯರು, ಬ್ಯಾಂಕ್‌ನಲ್ಲಿರುವ ಹಣ ಪಡೆದುಕೊಳ್ಳುವ ಸಂಬಂಧ ಲಿಖಿತ ರೂಪದಲ್ಲಿ ನೋಟಿಸ್ ನೀಡಿ, ಗ್ರಾಹಕರ ವಿಶ್ವಾಸ ಕಾಪಾಡುವಂತೆ ಆಗ್ರಹಿಸಿದರು.

ಗುರುರಾಘವೇಂದ್ರ ಬ್ಯಾಂಕ್ ನಾಲ್ಕು ಶಾಖೆಗಳನ್ನು ಹೊಂದಿದ್ದು, ಸುಮಾರು 2,400 ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಬ್ಯಾಂಕಿನ ವಹಿವಾಟಿನಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆ ಆರ್‌ಬಿಐ, ಬ್ಯಾಂಕ್ ಆಡಳಿತ ಮಂಡಳಿಗೆ ಸ್ಪಷ್ಟನೆ ಕೋರಿ ನೋಟಿಸ್ ನೀಡಿತ್ತು. ಆದರೆ, ಗ್ರಾಹಕರಿಗೆ ಹಾಗೂ ಷೇರುದಾರರಿಗೆ ಗರಿಷ್ಠ 35 ಸಾವಿರ ರೂ. ಮಾತ್ರ ಪಡೆಯಲು ಸೂಚಿಸಿರುವುದು ಸರಿಯಲ್ಲ. ಬದಲಾಗಿ, ಗ್ರಾಹಕರು ಮುಕ್ತವಾಗಿ ಹಣ ಪಡೆಯಲು ಅವಕಾಶ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News