ದಿಲ್ಲಿ ಹಿಂಸಾಚಾರ: ಮೂವರು ಪಿಎಫ್ ಐ ಕಾರ್ಯಕರ್ತರಿಗೆ ಜಾಮೀನು ನೀಡಿದ ಕೋರ್ಟ್

Update: 2020-03-13 17:29 GMT

ಹೊಸದಿಲ್ಲಿ: ದಿಲ್ಲಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ ಐ) ದ ಮೂವರು ಕಾರ್ಯಕರ್ತರಿಗೆ ದಿಲ್ಲಿ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.

ಬಂಧಿತರಿಗೆ ಜಾಮೀನು ನೀಡಬಹುದಾಗಿದ್ದರೂ ಯಾಕೆ ಜಾಮೀನು ನೀಡಿರಲಿಲ್ಲ ಎನ್ನುವ ಬಗ್ಗೆ ಉತ್ತರ ನೀಡುವಂತೆ ತನಿಖಾಧಿಕಾರಿಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಪ್ರಭ್ ದೀಪ್ ಕೌರ್ ಇದೇ ಸಂದರ್ಭ ಆದೇಶಿಸಿದ್ದಾರೆ.

ಪಿಎಫ್ ಐ ಕಾರ್ಯಕರ್ತರು ಎನ್ನಲಾದ ಮುಹಮ್ಮದ್ ದಾನಿಷ್, ಪರ್ವೇಝ್ ಆಲಂ ಮತ್ತು ಮುಹಮ್ಮದ್ ಇಲ್ಯಾಸ್ ರಿಗೆ ಜಾಮೀನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News