ಜಿ.ರಾಮಚಂದ್ರ ಠಾಕೂರ್
Update: 2020-03-26 14:58 GMT
ಉಡುಪಿ, ಮಾ.26: ಪರ್ಕಳದ ಹಿರಿಯ ಉದ್ಯಮಿ ಜಿ.ರಾಮಚಂದ್ರ ಠಾಕೂರ್ (78) ಬುಧವಾರ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ ಉಡುಪಿ ನಗರ ಬಿಜೆಪಿ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ಮಹೇಶ್ ಠಾಕೂರ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ರಾಮಚಂದ್ರ ಠಾಕೂರ್, ಮಣಿಪಾಲ ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ, ಚೇರ್ಕಾಡಿ ಎಚ್.ಆರ್.ಪಾಟೀಲ್ ವಿದ್ಯಾರ್ಥಿ ವೇತನ ಟ್ರಸ್ಟ್ನ ಕೋಶಾಧಿಕಾರಿ, ಚೇರ್ಕಾಡಿ ಆರ್.ಕೆ.ಪಾಟ್ಕರ್ ಶಾಲೆಯ ಸಂಚಾಲಕರಾಗಿದ್ದರಲ್ಲದೇ, ಉಡುಪಿ ಜಿಲ್ಲಾ ಕುಡಾಳ ದೇಶಸ್ಥ ಆದ್ಯ ಗೌಡ ಬ್ರಾಹ್ಮಣ ಸಮಾಜದ ಹಿರಿಯ ಮುಂದಾಳಾಗಿದ್ದರು.