ಸರಕಾರಿ ಬಸ್ಸುಗಳ ಮೂಲಕ ಬಡವರಿಗೆ ಆಹಾರ ಪೂರೈಸಿ: ಉಪೇಂದ್ರ ಮನವಿ

Update: 2020-03-28 17:06 GMT

ಬೆಂಗಳೂರು, ಮಾ.28: ಸರಕಾರಿ ಬಸ್ಸುಗಳ ಮೂಲಕ ಬಡ ವರ್ಗದ ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ತಲುಪಿಸಬೇಕೆಂದು ನಟ ಉಪೇಂದ್ರ ಮನವಿ ಮಾಡಿದ್ದಾರೆ.

ಶನಿವಾರ ಈ ಕುರಿತು ಟ್ವಿಟ್ ಮಾಡಿರುವ ಅವರು, ರಾಜ್ಯ ಸರಕಾರ ಗುಂಪು ಸೇರುವಾಗಿಲ್ಲ ಎಂದಿದೆ. ಆದರೆ, ಕೆಲವು ಕಡೆ ಜಾಸ್ತಿ ಗೂಂಪೂ ಸೇರುತ್ತಿದೆ ಎಂದಿದ್ದಾರೆ.

ಇನ್ನು ರಾಜ್ಯ ಸರ್ಕಾರ ತನ್ನದೇ ಆದ ಸಾರಿಗೆ ವ್ಯವಸ್ಥೆ ಹೊಂದಿದೆ.  ಇದನ್ನ ಬಳಸಿಕೊಂಡು ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನ ನ್ಯಾಯವಾದ ಬೆಲೆಯಲ್ಲಿ ಪ್ರತಿ ಹಳ್ಳಿಗೆ, ಕೊಡಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News