ಕೂಲಿ ಕಾರ್ಮಿಕರು ಹಾಗೂ ನಿರಾಶ್ರಿತರಿಗೆ ಮೂರು ಹೊತ್ತು ಉಚಿತ ಊಟ ವಿತರಣೆ: ರಾಮಲಿಂಗಾ ರೆಡ್ಡಿ

Update: 2020-03-31 16:25 GMT

ಬೆಂಗಳೂರು, ಮಾ. 31: ಕೊರೋನ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಬಿ.ಟಿ.ಎಂ. ಬಡಾವಣೆ ವಿಧಾನಸಭಾ ಕ್ಷೇತ್ರದಲ್ಲಿ ಬಡವರು, ಹೊರ ರಾಜ್ಯದ ಹಾಗೂ ಸ್ಥಳೀಯ ನಿರ್ಗತಿಕರಿಗೆ ಮಾಜಿ ಗೃಹ ಸಚಿವರು ಹಾಗೂ ಶಾಸಕ ರಾಮಲಿಂಗಾರೆಡ್ಡಿಯವರ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಸ್ವಯಂಸೇವಕರು ತಂಡದಿಂದ ದಿನದ ಮೂರು ಹೊತ್ತು ಊಟದ ವ್ಯವಸ್ಥೆ ಒಟ್ಟು ಎಂಟು ವಾರ್ಡ್‍ಗಳಲ್ಲಿ ಮೂರು ಸಾವಿರಕ್ಕೂ ಹೆಚ್ಚು ವ್ಯವಸ್ಥೆ ಮಾಡಲಾಗಿದೆ.

ಬೆಳಗ್ಗೆ ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಬೆಳಗ್ಗೆ 8 ರಿಂದ 10 ಗಂಟೆವರೆಗೆ ಉಪಹಾರ, ಮಧ್ಯಾಹ್ನ 12 ರಿಂದ 2 ಗಂಟೆವರೆಗೆ ಮತ್ತು ಸಂಜೆ 7 ರಿಂದ ರಾತ್ರಿ 9 ಗಂಟೆವರೆಗೆ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ.

ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರಾಮಲಿಂಗಾರೆಡ್ಡಿ, ಬಿ..ಟಿ.ಎಂ. ಲೇಔಟ್ ಕ್ಷೇತ್ರದಲ್ಲಿ ಅಗತ್ಯವಿರುವವರಿಗೆ ಕೊರೋನ ವೈರಸ್ ಸಮಸ್ಯೆ ಮುಗಿಯುವ ತನಕ ತಿಂಡಿ, ಊಟ ಪೂರೈಸಲಾಗುವುದು. ಪ್ರತಿದಿನ 3 ಸಾವಿರಕ್ಕೂ ಹೆಚ್ಚು ಜನರಿಗೆ ಸ್ವಯಂ ಸೇವಕರ ಮೂಲಕ ಆಹಾರ ವಿತರಿಸಲಾಗುವುದು ಎಂದರು. ಏಪ್ರಿಲ್ 14 ರವರೆಗೆ ಉಚಿತ ಊಟದ ವ್ಯವಸ್ಥೆ ಮಾಡಿದ್ದು, ಒಂದು ತಿಂಗಳು ಲಾಕ್ ಡೌನ್ ಆದರೂ ಸಹ ನಿರಂತರವಾಗಿ ಆಹಾರ ಪೊಟ್ಟಣಗಳನ್ನು ಹಂಚಲಾಗುವುದು. ಲಕ್ಕಸಂದ್ರದಿಂದ ಉಚಿತ ಊಟದ ವಾಹನಗಳು ಪ್ರತಿದಿನ ತೆರಳಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News