ಕೊರೋನ ವಿರುದ್ಧ ಹೋರಾಟಕ್ಕೆ ಕೆಜೋಡಿಸಿದ ಕುಂಬ್ಳೆ

Update: 2020-04-01 04:48 GMT

ಬೆಂಗಳೂರು, ಮಾ.31: ಕೊರೋನ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಮಂಗಳವಾರ ಕೈಜೋಡಿಸಿದ್ದಾರೆ.

 ಲೆಜೆಂಡರಿ ಲೆಗ್ ಸ್ಪಿನ್ನರ್ ಕುಂಬ್ಳೆ ಪ್ರಧಾನಮಂತ್ರಿ ಪರಿಹಾರ ನಿಧಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿಗೆ ತನ್ನ ಕೊಡುಗೆ ನೀಡಿದ್ದಾರೆ. ಆದರೆ, ಅವರು ಎಷ್ಟು ಮೊತ್ತ ನೀಡಿದ್ದೇನೆಂದು ಬಹಿರಂಗಪಡಿಸಿಲ್ಲ.

 ‘‘ಕೋವಿಡ್-19 ವೈರಸ್‌ನ್ನು ಭಾರತದಿಂದ ಓಡಿಸಲು ನಾವೆಲ್ಲರೂ ಒಂದಾಗುವ ಅಗತ್ಯವಿದೆ. ವೈರಸ್ ವಿರುದ್ಧ ಸಮರದಲ್ಲಿ ಒಗ್ಗಟ್ಟಿನಿಂದ ಸೆಣಸಾಡಬೇಕಾಗಿದೆ. ಪಿಎಂ ಕೇರ್ ಫಂಡ್ ಹಾಗೂ ಸಿಎಂ ರಿಲೀಫ್ ಫಂಡ್‌ಗೆ ನನ್ನ ವಿನಮ್ರ ಕೊಡುಗೆ ನೀಡಿದ್ದೇನೆ. ದಯವಿಟ್ಟು ಮನೆಯಲ್ಲಿ ಉಳಿಯಿರಿ, ಸುರಕ್ಷಿತವಾಗಿರಿ’’ ಎಂದು ಕನ್ನಡಿಗ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News