ಹಾಜಿ ಐ. ಬಾಪುಞಿ
Update: 2020-04-05 04:07 GMT
ಮಂಗಳೂರು : ಸುರತ್ಕಲ್ ಇಡ್ಯಾ ನಿವಾಸಿ ಹಾಜಿ ಐ. ಬಾಪುಞಿ ಇಡ್ಯಾ ಶನಿವಾರ ನಿಧನರಾದರು.
ಇವರು ಖಿಲಿರಿಯಾ ವಿದ್ಯಾ ಸಮಿತಿಯ ಗೌರವಾಧ್ಯಕ್ಷ, ಖಿಲಿರಿಯಾ ಆಂಗ್ಲ ಮಾಧ್ಯಮ ಶಾಲೆಯ ಸ್ಥಾಪಕಾಧ್ಯಕ್ಷ, ಸುರತ್ಕಲ್ ಕೇಂದ್ರ ಮುಹಿಯುದ್ದೀನ್ ಜುಮಾ ಮಸೀದಿ ಮತ್ತು ಗೌಸಿಯಾ ಕಾಂಪ್ಲೆಕ್ಸ್ನ ಆಡಳಿತ ಕಮಿಟಿಯ ಮಾಜಿ ಸದಸ್ಯರು ಹಾಗೂ ಹಲವು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.
ಮೃತರು ಪತ್ನಿ, ಐವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.