ಬೆಂಗಳೂರು: ಕೋಳಿ ಫಾರ್ಮ್ನಲ್ಲಿ ಸಿಲುಕಿದ ಚಿರತೆ
Update: 2020-04-05 17:25 GMT
ಬೆಂಗಳೂರು, ಎ.5: ಕೊರೋನ ವೈರಸ್ ಭೀತಿ ಹಿನ್ನೆಲೆ ದೇಶಾದ್ಯಂತ ಲಾಕ್ಡೌನ್ ಘೋಷಣೆಯಾಗಿದ್ದು ಜನರೆಲ್ಲಾ ಮನೆ ಸೇರಿದ್ದಾರೆ. ಈ ಹೊತ್ತಲ್ಲಿ ಚಿರತೆಯೊಂದು ಕೋಳಿ ಫಾರ್ಮ್ನಲ್ಲಿ ಸಿಲುಕಿದ ಘಟನೆ ಬೆಂಗಳೂರು ಹೊರವಲಯದ ಚಂದ್ರಪ್ಪ ಸರ್ಕಲ್ ಬಳಿಯ ಸುಲಿವಾರ ಸಮೀಪ ನಡೆದಿದ್ದು, ಫಾರ್ಮ್ನಲ್ಲಿದ್ದ ಚಿರತೆಯನ್ನು ಸದ್ಯ ರಕ್ಷಣೆ ಮಾಡಲಾಗಿದೆ.
ಕರ್ನಾಟಕ ಅರಣ್ಯ ಇಲಾಖೆ ಸಿಬ್ಬಂದಿ, ಸಹಾಯಕ ಅರಣ್ಯ ರಕ್ಷಕ ವೆಂಕಟೇಶ್ ಹಾಗೂ ಪಶುವೈದ್ಯ ಉಮಾಶಂಕರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ಚಿರತೆಗೆ ಅರಿವಳಿಕೆ ನೀಡಿ ಸೆರೆಹಿಡಿದ್ದಾರೆ. ಆರೋಗ್ಯ ತಪಾಸಣೆ ನಡೆಸಿದ ಬಳಿಕ ಚಿರತೆಯನ್ನು ಕಾಡಿಗೆ ಬಿಡಲಾಗುತ್ತದೆ.