ಚಿದಂಬರ್ ರೈ

Update: 2020-04-05 17:33 GMT

ಕೊಣಾಜೆ : ಬಂಟ್ವಾಳ ತಾಲೂಕಿನ‌ ಕೈರಂಗಳ ಗ್ರಾಮದ ಮೇಗಿನ ಮನೆ ಚಿದಂಬರ್ ರೈ (62)ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ರವಿವಾರ ನಿಧನರಾದರು.

 ಶ್ರೀ ಕೃಷ್ಣ ಗೇಮ್ಸ್ ಕ್ಲಬ್ ಕೈರಂಗಳದ ಸ್ಥಾಪಕ ಕಾರ್ಯದರ್ಶಿಯಾಗಿ, ಕಬಡ್ಡಿ ಆಟಗಾರನಾಗಿ,  ಬಾಳೆಪುಣಿ ಗ್ರಾಮ ಪಂಚಾಯಿತಿ ಸದಸ್ಯರಾಗಿ ಕೈರಂಗಳ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದ್ದರು. ಅವರು ನಾಟಕ ಕಲಾವಿದರಾಗಿಯೂ ಪ್ರಸಿದ್ಧಿ ಪಡೆದಿದ್ದರು.

ಮೃತರಿಗೆ ತಂದೆ,  ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ. ಶಾಸಕ ಯು.ಟಿ. ಖಾದರ್, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ, ರಾಜ್ಯಮಟ್ಟದ ಹಿರಿಯ ವಾಲಿಬಾಲ್ ಆಟಗಾರ ಐತಪ್ಪ ಕುಲಾಲ್ ಸೇರಿದಂತೆ ಪ್ರಮುಖರು‌ ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ