ಪ್ರಾಣಿ, ಪಕ್ಷಿಗಳಿಗೆ ಆಹಾರ, ನೀರು ಸಿಗುವಂತೆ ಮಾಡೋಣ: ಸಿಎಂ ಕಳಕಳಿ

Update: 2020-04-10 07:47 GMT

ಬೆಂಗಳೂರು, ಎ.10: ಬಿಸಿಲ ಬೇಗೆ, ಲಾಕ್ ಡೌನ್ ನಿಂದ ಸಾಕುಪ್ರಾಣಿಗಳು ಮಾತ್ರವಲ್ಲದೆ ಪಕ್ಷಿಗಳೂ ಸಮಸ್ಯೆಗೆ ಒಳಗಾಗಿವೆ. ಆಹಾರ, ನೀರಿಗಾಗಿ ಪರಿತಪಿಸುತ್ತಿರುವ ಅವುಗಳ ಕಡೆಗೂ ಗಮನಹರಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳಕಳಿಯ ಮನವಿ ಮಾಡಿದ್ದಾರೆ.

ಬಿಸಿಲ ಬೇಗೆ, ಲಾಕ್ ಡೌನ್‌ಬಿಸಿ ನಾಯಿ, ಬೆಕ್ಕುಗಳಂತಹ ಸಾಕುಪ್ರಾಣಿಗಳಿಗೂ ತಟ್ಟಿದೆ. ಪಕ್ಷಿಗಳೂ ಸಹ ಆಹಾರ, ನೀರಿಗಾಗಿ ಪರಿತಪಿಸುತ್ತಿವೆ. ಸಾಧ್ಯವಾದಷ್ಟೂ ಅವುಗಳಿಗೆ ಆಹಾರ, ನೀರು ಸಿಗುವಂತೆ ಮಾಡೋಣ, ಮಾನವೀಯತೆ ಮೆರೆಯೋಣ’’ ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮುಖ್ಯಮಂತ್ರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News