×
Ad

ಮಾತೆರೆಗ್ ಬಿಸುತ ಸುಭಾಸುಯೊಲು: ಮುಖ್ಯಮಂತ್ರಿ ಯಡಿಯೂರಪ್ಪ

Update: 2020-04-14 09:39 IST

ಬೆಂಗಳೂರು, ಎ.14: ‘‘ಬಿಸುತ ದಿನ ಪೊಸತ್ ಮನಸ್ ಪೊಸತ್ ಕನಸ್ ಪೊಸತ್ ತೆನಸ್ ಮಾತಲಾ ಪೊಸತ್ ಪೊಸತ್ ಆವಡ್. ಪೊಸ ವರ್ಷೊಡು ಪರತ್ ಮಹಾಮಾರಿ ದೂರ ಅದ್ ಸುಖ ಸಂತೋಸ ನೆಲೆಸಡ್. ಮಾತೆರೆಗ್ ಬಿಸುತ ಸುಭಾಸುಯೊಲು’’... ಹೀಗೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತುಳುವಿನಲ್ಲಿ ವಿಷು(ಸೌರಮಾನ ಯುಗಾದಿ) ಶುಭಾಶಯ ಕೋರುವ ಮೂಲಕ ತುಳುನಾಡಿಗರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮುಖ್ಯಮಂತ್ರಿ ಈ ಬಗ್ಗೆ ಟ್ವೀಟ್ ಮಾಡಿದ್ದು, ತುಳು ಜೊತೆಗೆ ‘ಸೌರ ಸಂವತ್ಸರ,’ ‘ಸ್ಥಿರ ಸಂವತ್ಸರ’ ಎಂದು ಕರೆಯಲಾಗುವ ‘ವಿಷು’ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿರುವ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ಈ ಸೌರಮಾನ ಯುಗಾದಿಯು, ಎಲ್ಲರ ಬಾಳಿನಲ್ಲೂ ಸುಖ, ಸಂತೋಷಗಳನ್ನು ತರಲಿ ಎಂದು ಕನ್ನಡದಲ್ಲೂ ವಿಷು ಶುಭಾಶಯ ಕೋರಿದ್ದಾರೆ. ಮುಖ್ಯಮಂತ್ರಿಯವರ ತುಳುಪ್ರೇಮಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News