ಉಮೇಶ ಪ್ರಭು
Update: 2020-04-16 16:30 GMT
ಶಿರ್ವ, ಎ.16: ಶಿರ್ವ ಎಲ್ಲೊಂಟು ಗೋವಿಂದ ಪ್ರಭು ಅವರ ಪುತ್ರ ಉಮೇಶ ಪ್ರಭು(49) ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.
ಬಸ್ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಕಾರ್ಕಳ ಹಿರ್ಗಾನದ ಮೂರೂರಿನಲ್ಲಿ ಐಸ್ಕ್ರೀಮ್ ಪಾರ್ಲರ್ನಲ್ಲಿ ಮೆನೇಜರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. ನಾಟಕ ಕಲಾವಿದರೂ, ಬಂಟಕಲ್ಲು ಯುವವೃಂದದ ಸಕ್ರೀಯ ಸದಸ್ಯರು ಕೂಡ ಆಗಿದ್ದರು. ಮೃತರು ತಂದೆ, ತಾಯಿ, ಪತ್ನಿ, ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.