ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರ ಕುಟುಂಬಗಳಿಗೆ ಐಎಸ್ಎಫ್ ಸಹಾಯಹಸ್ತ

Update: 2020-04-20 05:02 GMT

ದಮ್ಮಾಮ್, ಎ.20:   ಕೋವಿಡ್ -19 ಲಾಕ್ ಡೌನ್‌ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರ ಕುಟುಂಬಸ್ಥರಿಗೆ ಅಗತ್ಯ ನೆರವು ನೀಡಲು ಇಂಡಿಯನ್ ಸೋಶಿಯಲ್ ಫೋರಂ(ಐಎಸ್ಎಫ್) ದಮ್ಮಾಮ್, ಕರ್ನಾಟಕ ಘಟಕವು ಮುಂದಾಗಿದೆ. ಇದಕ್ಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ಼್ ಇಂಡಿಯಾ, ಕರ್ನಾಟಕ ರಾಜ್ಯ ಘಟಕದೊಂದಿಗೆ ಕೈಜೋಡಿಸಿದೆ.

ಅನಿವಾಸಿ ಕನ್ನಡಿಗರು ಕರ್ನಾಟಕದಲ್ಲಿ ಸಂಕಷ್ಟದಲ್ಲಿರುವ ತಮ್ಮ ಕುಟುಂಬಗಳಿಗೆ ಆಹಾರ, ಚಿಕಿತ್ಸೆ ಮುಂತಾದ ಅಗತ್ಯಗಳಿಗೆ ನೆರವು‌ ಬಯಸುವುದಾದರೆ ಈ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ರಿಯಾದ್ ಸುತ್ತಮುತ್ತಲಿನ ಅನಿವಾಸಿ ಕನ್ನಡಿಗರು ಸಿರಾಜ್ (0538696274) ಹಾಗೂ ರಫೀಕ್ (0562152635) ದಮ್ಮಾಮ್ ಪ್ರದೇಶದವರು ನೌಶಾದ್ ಕಾಟಿಪಳ್ಳ (0508084159), ಮಕ್ಕಾದಲ್ಲಿರುವವರು ಮಜೀದ್ (0530146664), ಜಿದ್ದಾದವರು ರಫೀಕ್ ಬುಡೋಳಿ (0587773916) ಮತ್ತು ಹಾರಿಸ್ (0566010504), ಜುಬೈಲ್ ನವರು ನಝೀರ್ ತುಂಬೆ (0501078912), ಜಿಝಾನ್ ಪ್ರದೇಶದವರು ತಂಶೀರ್ ಬಜ್ಪೆ (0594094682), ಮದೀನಾ ಪ್ರದೇಶದವರು ಇಬ್ರಾಹೀಂ (0564146640), ಅಬಹಾದವರು ಅಶ್ಫಾಕ್ ಪುಂಜಾಲಕಟ್ಟೆ (0562232958) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News