ರಮಝಾನ್: ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಪಾಲಿಸಲು ಸಿಎಂ ಬಿಎಸ್‌ವೈ ಮನವಿ

Update: 2020-04-22 16:34 GMT

ಬೆಂಗಳೂರು, ಎ.22: ಕೋವಿಡ್-19 ತಡೆಯುವ ಸಂಬಂಧ ರಮಝಾನ್ ಉಪವಾಸದ ವೇಳೆ ಪಾಲಿಸಬೇಕಾದ ಸಲಹೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಎಲ್ಲ ಮುಸ್ಲಿಮರು ಅದನ್ನು ತಪ್ಪದೆ ಪಾಲಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಆರೋಗ್ಯವಾಗಿದ್ದರೆ ಮಾತ್ರ ಉಪವಾಸ ಮಾಡಬೇಕು. ವೈದ್ಯರ ಸಲಹೆ ಇಲ್ಲದೆ ಉಪವಾಸ ಮಾಡುವುದು ಆರೋಗ್ಯಕ್ಕೆ ಅಪಾಯಕಾರಿ. ಉಸಿರಾಟದ ಸಮಸ್ಯೆ ಇದ್ದರಂತೂ ವೈದ್ಯರ ಸಲಹೆ ಪಡೆಯಲೇಬೇಕು. ಅನಾರೋಗ್ಯ ಇದ್ದೂ ಉಪವಾಸ ಮಾಡುವುದು ತುಂಬಾ ಅಪಾಯಕಾರಿ. ಮನೆಯಲ್ಲೆ ಪ್ರಾರ್ಥನೆ ಮಾಡಬೇಕು. ಅಲ್ಲಿಯೂ ವ್ಯಕ್ತಿಗತ ಅಂತರ ಕಾಪಾಡಿಕೊಳ್ಳಬೇಕು. ಪ್ರಾರ್ಥನೆಗೆ ಜನ ಸೇರಬಾರದು, ಇಫ್ತಾರ್ ಕೂಟ ಬೇಡ. ಧಾರ್ಮಿಕ ಮುಖಂಡರು ಎಲ್ಲರಿಗೂ ಈ ಸಲಹೆಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News