ಸುಜೀಂದ್ರ ಬೇಕಲ್
Update: 2020-04-23 12:02 GMT
ಪುತ್ತೂರು : ಪುತ್ತೂರು ರಾಮಕ್ಷತ್ರೀಯ ಸಂಘದ ಮಾಜಿ ಅಧ್ಯಕ್ಷ ಸುಜೀಂದ್ರ ಬೇಕಲ್ (55) ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಎ.22 ರಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.
ಕನ್ನಂಗಲ ದಿ. ಪದ್ಮನಾಭ ಸರೋಜಿನಿ ಅವರ ಪುತ್ರ ಕೆಮ್ಮಾಯಿ ನಿವಾಸಿ ಸುಜೀಂದ್ರ ಬೇಕಲ್ ಮಂಗಳೂರು ಉಪನೋಂದಣಾಧಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು 10 ವರ್ಷದ ಹಿಂದೆ ಪುತ್ತೂರು ಉಪನೋಂದಣಾಧಿಕಾರಿ ಕಚೇರಿಯಲ್ಲೂ ಕರ್ತವ್ಯ ನಿರ್ವಹಿಸಿದ್ದರು. ಮ್ರತರು ಪತ್ನಿ, ಪುತ್ರ, ಪುತ್ರಿ ಅವರನ್ನು ಅಗಲಿದ್ದಾರೆ.