ಬೋಳ ರಮೇಶ ಕಾಮತ್

Update: 2020-05-08 16:42 GMT

ಉಡುಪಿ, ಮೇ 8: ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಬಳಿಯ ಪ್ರಗತಿನಗರ ನಿವಾಸಿ ಬೋಳ ರಮೇಶ ಕಾಮತ್(73) ಅಲ್ಪಕಾಲದ ಅಸೌಖ್ಯ ದಿಂದ ಇಂದು ನಿಧನರಾದರು.

ಇವರು ಕಾರ್ಕಳದ ಅಶೋಕ ಭವನ್ ಹೋಟೆಲ್ನ ಮಾಲಕರಾಗಿದ್ದು, ಕಾರ್ಕಳ ಶ್ರೀವೆಂಕಟರಮಣ ಯಕ್ಷಗಾನ ಮಂಡಳಿಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಕಾರ್ಕಳ ಟೌನ್ ಕೋಪರೇಟ್ ಬ್ಯಾಂಕ್ ಇದರ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರು ಪತ್ನಿ, ಮುಖ್ಯ ಶಿಕ್ಷಕಿ ಕಲ್ಯಾಣಿ ಆಶಾ ಕಾಮತ್ ಹಾಗೂ ಇಬ್ಬರು ಪುತ್ರರು ಮತ್ತು ಅಪಾರ ಬಂದು ಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ