ಉತ್ತರ ಪ್ರದೇಶ: ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ನಗರ ಪ್ರವೇಶಿಸಿದ ವಲಸೆ ಕಾರ್ಮಿಕರು; ವಿಡಿಯೋ ವೈರಲ್

Update: 2020-05-17 12:36 GMT

ಹೊಸದಿಲ್ಲಿ: ರಾಜ್ಯಕ್ಕೆ ಆಗಮಿಸುವ ವಲಸೆ ಕಾರ್ಮಿಕರನ್ನು ತಡೆಯಲು ಹಾಕಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೆಸೆದ ವಲಸೆ ಕಾರ್ಮಿಕರು ನಗರದೊಳಕ್ಕೆ ಪ್ರವೇಶಿಸಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ.

ನಗರದೊಳಕ್ಕೆ ನುಗ್ಗಿ ಓಡಿ ಬರುತ್ತಿರುವ ವಲಸೆ ಕಾರ್ಮಿಕರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಡಳಿತವು ಆಹಾರಕ್ಕೆ ಅಥವಾ ವಸತಿಗಾಗಿ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿಲ್ಲ ಎಂದು ಅವರು ಆರೋಪಿಸಿದರು.

ಪ್ರಯಾಗ್ ರಾಜ್ ನಲ್ಲೂ ಪರಿಸ್ಥಿತಿ ಇದೇ ರೀತಿ ಇದೆ. ಮಧ್ಯಪ್ರದೇಶದಿಂದ ಆಗಮಿಸುವ ವಲಸೆ ಕಾರ್ಮಿಕರು ರೇವಾ ಮೂಲಕ ರಾಜ್ಯ ಪ್ರವೇಶಿಸಿದ್ದಾರೆ.

ಕಾಲ್ನಡಿಗೆ, ಸೈಕಲ್ ಗಳು ಮತ್ತು ಟ್ರಕ್ ಗಳಲ್ಲಿ ಆಗಮಿಸುವ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಸ್ಥರನ್ನು ತಡೆಯಬೇಕು ಎಂದು ನಿನ್ನೆ ಉತ್ತರ ಪ್ರದೇಶ ಸಿಎಂ ಜಿಲ್ಲೆಯ ಅಧಿಕಾರಿಗಳಿಗೆ ಆದೇಶಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News