ಎ.ನಾರಾಯಣ ಕಿಣಿ
Update: 2020-05-18 16:22 GMT
ಉಡುಪಿ, ಮೇ 18:ಕಾರ್ಪೊರೇಷನ್ ಬ್ಯಾಂಕ್ನ ನಿವೃತ್ತ ಅಸಿಸ್ಟೆಂಟ್ ಮ್ಯಾನೇಜರ್ ಎ.ನಾರಾಯಣ ಕಿಣಿ (67) ಅವರು ಸೋಮವಾರ ಅಲೆವೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗವನ್ನಗಲಿದ್ದಾರೆ.
ಕಾರ್ಪೋರೇಷನ್ ಬ್ಯಾಂಕಿನ ಮಲ್ಪೆ, ಕುರ್ಕಾಲು, ಭಟ್ಕಳ, ಮಣಿಪಾಲ, ಪೆರಂಪಳ್ಳಿ, ಮೂಳೂರು ಮತ್ತಿತರ ಶಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ನಾರಾಯಣ ಕಿಣಿ, ಬ್ಯಾಂಕ್ ನೌಕರರ ಯೂನಿಯನ್ ಎಐಬಿಇಎಯ ಜಿಲ್ಲಾ ಕಾರ್ಯದರ್ಶಿಯಾಗಿ, ಅಲೆವೂರಿನ ನೆಹರು ಸ್ಪೋರ್ಟ್ ಕಲ್ಚರಲ್ ಸಂಸ್ಥೆಯ ಅಧ್ಯಕ್ಷರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಸ್ಥಾಪಕ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.