ಕೆಎಸ್ಸಾರ್ಟಿಸಿ ಬಸ್ಸುಗಳ ಸಮಯ ಬದಲಾವಣೆ: ರಾತ್ರಿ 7ಕ್ಕೆ ಕೊನೆಯ ಬಸ್ ಕಾರ್ಯಾರಂಭ

Update: 2020-05-20 16:41 GMT

ಬೆಂಗಳೂರು, ಮೇ 20: ಕೆಎಸ್ಸಾರ್ಟಿಸಿ ಬಸ್ಸುಗಳ ಸಂಚಾರವನ್ನು ಈ ಹಿಂದೆ ಬೆಳಗ್ಗೆ 7ರಿಂದ ಪ್ರಾರಂಭಿಸಿ ಸಂಜೆ 7ರ ಒಳಗಾಗಿ ಸಂಚಾರವನ್ನು ಮುಕ್ತಾಯ ಮಾಡಲು ಆದೇಶಿಸಿತ್ತು. ಆದರೆ, ಮೇ 21ರಿಂದ ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲೆಯ ಬಸ್ ನಿಲ್ದಾಣಗಳಲ್ಲೂ ಕೊನೆಯ ಬಸ್ ರಾತ್ರಿ 7ಕ್ಕೆ ಕಾರ್ಯಾರಂಭ ಮಾಡುತ್ತದೆ.

ಬೆಂಗಳೂರಿನಿಂದ ಬೀದರ್, ರಾಯಚೂರು, ಮಂಗಳೂರು ಸೇರಿದಂತೆ ದೂರದ ಪ್ರದೇಶಗಳಿಗೆ ಕೊನೆಯ ಬಸ್ ರಾತ್ರಿ 7ಕ್ಕೆ ಕಾರ್ಯಾರಂಭ ಮಾಡುತ್ತದೆ. ಹಾಗೆಯೇ ಇತರೆ ಜಿಲ್ಲೆಗಳಿಂದಲೂ ಬೆಂಗಳೂರಿಗೆ ಹೊರಡುವ ಕೊನೆಯ ಬಸ್ ರಾತ್ರಿ 7ಕ್ಕೆ ಕಾರ್ಯಾಚರಣೆ ಮಾಡುತ್ತದೆ ಎಂದು ಕೆಎಸ್ಸಾರ್ಟಿಸಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News