ಯಶವಂತ್ ಬಿ.ಕೆ.
Update: 2020-05-22 13:13 GMT
ಉಡುಪಿ, ಮೇ 22: ಉಡುಪಿ ರಾಮಕ್ಷತ್ರಿಯ ಯುವ ಘಟಕದ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಯಶವಂತ್ ಬಿ.ಕೆ. ಶುಕ್ರವಾರ ಹೃದಯಾಘಾತದಿಂದ ನಿಧನರಾದರು.
ಕಿನ್ನಿಮುಲ್ಕಿಯ ನಿವಾಸಿಯಾಗಿರುವ ಇವರು, ಉಡುಪಿ ಮಿಷನ್ ಆಸ್ಪತ್ರೆ ಬಳಿ ಕ್ಲಾಸಿಕ್ ಪಾದರಕ್ಷೆ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಗೌರವಾರ್ಥ ಮಧ್ಯಾಹ್ನದ ಬಳಿಕ ನಗರದ ಎಲ್ಲ ಪಾದರಕ್ಷೆ ಅಂಗಡಿಗಳು ಬಂದ್ ಆಚರಣೆ ಮಾಡಿದವು.