ಹಣ ಪಡೆದು ಕ್ವಾರಂಟೈನ್ ರದ್ದು ಆರೋಪ: ದೂರು ಸಲ್ಲಿಕೆ

Update: 2020-05-23 15:42 GMT

ಬೆಂಗಳೂರು, ಮೇ 23: ಹಣ ಪಡೆದು ಕ್ವಾರಂಟೈನ್ ರದ್ದುಪಡಿಸುವ ಆರೋಪಕ್ಕೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ವೈದ್ಯರೊಬ್ಬರು ದೂರು ಸಲ್ಲಿಸಿದ್ದಾರೆ.

ಗಾಂಧಿನಗರದ ದೀವಾ ಹೊಟೇಲ್‍ನಲ್ಲಿ ಕ್ವಾರಂಟೈನ್‍ನಲ್ಲಿರುವವರಿಗೆ 25 ಸಾವಿರ ರೂ. ನೀಡಿದರೆ ಕ್ವಾರಂಟೈನ್ ಅವಧಿಗೂ ಮೊದಲೇ ಮನೆಗೆ ಕಳುಹಿಸುವುದಾಗಿ ಆಮಿಷವೊಡ್ಡಿರುವ ಬಗ್ಗೆ ಆರೋಪ ಕೇಳಿಬಂದಿದೆ. ಈ ಸಂಬಂಧ ಡಾ. ಬಿ.ವೈ.ನಂದ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News